ಅಮ್ಮ ಹೇಳಿದ ಎಂಟು ಸುಳ್ಳುಗಳು |ಭಾವತೀರಯಾನ

ಪುಸ್ತಕ : ಅಮ್ಮ ಹೇಳಿದ ಎಂಟು ಸುಳ್ಳುಗಳು
ಲೇಖಕರು : ಎ. ಆರ್. ಮಣಿಕಾಂತ್
ಬೆಲೆ : ೧೨೦

ಪುಸ್ತಕ : ಭಾವತೀರಯಾನ
ಲೇಖಕರು : ಎ. ಆರ್. ಮಣಿಕಾಂತ್
ಪುಟಗಳು : ೧೬೪
ಬೆಲೆ : ೧೨೦

ಎ. ಆರ್. ಮಣಿಕಾಂತ್ ಅವರು ಬರೆದ ಈ ಎರಡೂ ಪುಸ್ತಕಗಳಲ್ಲಿ ಅದೆಷ್ಟೂ ಯಶೋಗಾಥೆಗಳಿವೆ. ಇಲ್ಲಿ ಮೂಡಿಬರುವ ಪ್ರತಿ ಕಥೆಯೂ ಮಲಗಿದ್ದ ನಮ್ಮ ಕನಸುಗಳನ್ನು ಬದಿದಬ್ಬಿಸುತ್ತವೆ. ಎಲ್ಲವೂ ಇದ್ದು ನಾವು ನಮ್ಮ ಗುರಿ ತಲುಪಲು ಎಡವುತ್ತೇವೆ ಇಲ್ಲವೇ ‘ನಮಗೆ ಅದೃಷ್ಟವಿಲ್ಲ’ ಎಂಬ ನೆಪ ಹೇಳಿ ನಮ್ಮ ಗುರಿಗಳನ್ನು ಗಾಳಿಗೆ ತೋರುತ್ತೇವೆ. ಆದರೆ ಇವೆರಡು ಪುಸ್ತಕಗಳಲ್ಲಿ ಬರುವ ಎಲ್ಲ ಕಥಾನಾಯಕ/ಕಥಾನಾಯಕಿ ಅನುಭವಿಸಿದ ಪಾಡು ಅಷ್ಟಿಷ್ಟಲ್ಲ.

ಊಟಕ್ಕೂ ಪರೆದಾಡಿದವರಿಂದ ಹಿಡಿದು ಬದುಕೋಕೆ ಸೂರಿಲ್ಲದೆ ಅಲೆಮಾರಿ ಜೀವನ ಸಾಗಿಸಿ ಇಂದು ಬದುಕಿನ ಉತ್ತುಂಗದ ಸ್ಥಾನ ತಲುಪಿದ್ದವರ ಮನ ಮುಟ್ಟುವ ಕಥೆ ಇದೆ .ಒಬ್ಬ ಸಾಧಾರಣ ಮನುಷ್ಯ ಯಾವ ಗಾಡ್ ಫಾದರ್ ಇಲ್ಲದೇ ಬರೀ ತನ್ನ ಪರಿಶ್ರಮದದಿಂದ ಸಮಾಜದಲ್ಲಿ ತನ್ನದೇ ಆದ ಒಂದು ಛಾಪು ಮೂಡಿಸಬಹುದು ಎಂದು ತೋರಿಸಿಕೊಟ್ಟವರ ಚರಿತ್ರೆವಿದೆ .

ಇಲ್ಲಿ ಬರುವ ಹಲವಾರು ಕಥೆಗಳನ್ನು ನೀವಿಗಾಗಲೇ ಸಾಮಾಜಿಕ ತಾಣಗಳಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಮಣಿಕಾಂತ್ ಅವರು ಪ್ರಸ್ತುತ ಪಡಿಸಿದ ರೀತಿ ಎಂಥಹ ಕಲ್ಲು ಹೃದಯವನ್ನು ಕೂಡ ಕರಗಿಸುತ್ತದೆ. ಇಲ್ಲಿ ಬರುವ ಹಲವು ಕಥೆಗಳು ನಮ್ಮನ್ನು ಘಾಡವಾದ ಚಿಂತನೆಗೆ ಹಚ್ಚುತ್ತವೆ. ಮಾನವಿಯತೆ ಮೆರೆಯುವ ಕಥೆಗಳ ಜೊತೆಗೆ ಸಾಮಾಜಿಕ ಕಳಕಳಿವಿರುವ ಕಥೆಗಳು ಇಲ್ಲಿ ಬಂದು ಹೋಗುತ್ತವೆ.

ಅಂಗವೈಫಲ್ಯ ,ಕಡುಬಡತನ,ಶೋಷಣೆ, ಅಲೆಮಾರಿ ಜೀವನ , ಸೋಲುಗಳ ಸರಮಾಲೆ,ನಂಬಿಕೆದ್ರೋಹ ಹೀಗೆ ಇಂತಹ ಅನೇಕ ಜಟಿಲ ಕಷ್ಟಗಳಿಗೆ ಎದೆಯೊಡ್ಡಿ ಜೀವನ ಸಾಗಿಸಿದವರ ಕಥೆ ಆಲಿಸಿದಾಗ ಕಣ್ಣಂಚಿನಲಿ ಹನಿ ಜಿನುಗದೆ ಇರದು.. ಅಂತಹ ಕಡುಕಷ್ಟ ಎದುರಿಸಿ, ಯಾವ ಸಮಾಜ ತಮ್ಮನ್ನು ಹಗುರವಾಗಿ ಕಂಡಿತ್ತೋ ಅದೇ ಸಮಾಜ ಇಂದು ಅವರಿಗೆ ಸಲಾಂ ಹೊಡೆಯುವಹಾಗೆ ಬದುಕಿದವರಿಗೆ ಹಾಗೂ ಅಂತಹ ಯಶೋಗಾಥೆಗಳನ್ನು ನಮಗೆ ಪರಿಚಯಿಸಿದ
ಎ. ಆರ್. ಮಣಿಕಾಂತ್ ಅವರಿಗೆ ನನ್ನದೊಂದು ದೊಡ್ಡ ಸಲಾಂ!

ನೀವೂ ಇವೆರಡು ಪುಸ್ತಕಗಳನ್ನು ಓದಿ..

https://sapnaonline.com/baavatirayana-ar-manikanth-neelima-prakashana-12929192

https://sapnaonline.com/amma-helida-entu-sullugalu-ar-manikanth-neelima-prakashana-4858345

One comment

  1. ನಮಸ್ತೆ ಸರ್,ನನ್ನ ಹೆಸರು ಅನುಷಾ
    ನನ್ನ ಜೀವನದಲ್ಲಿ ಇಲ್ಲಿಯ ತನಕ ಅಂದ್ರೆ ೨೦ ವಷ೯ ಬರೀ ಕಷ್ಟ ವನ್ನೆ ನೋಡಿದೆ.ಬದುಕು ಎನ್ನುವ ಪದ ದಿನ ದಿನಕ್ಕೂ ಸಾಯಲೆ ಬೇಕೆಂದು ಹಂಬಲಿಸುತಿತ್ತು.ಬಡತನದಿಂದ ಹುಟ್ಟುವುದೇ ಶಾಪ, ನಮ್ಮ ಪ್ರತಿಭೆಗೆ ಬೆಲೆ ಇಲ್ಲ ಎಂದು ಅರಿವಿಗೆ ಬಂತು.೨೦೧೫ ನನ್ನ ಜೀವನ ಬದಲಾಯಿಸಿತು ಕಾರಣ ನೀವು,ನಿಮ್ಮ ಭಾವ ತೀರ ಯಾನ,ಈ ಪುಸ್ತಕದಿಂದ ಆತ್ಮವಿಶ್ವಾಸ ಹೆಚ್ಚಾಯಿತು.ಅವಕಾಶಗಳಿಗಾಗಿ ಕಾದು ಕುಳಿತಿದ್ದ ನಾನು ಅವಕಾಶಗಳನ್ನು ಹುಡುಕುತ್ತಾ ಹೋದೆ ಈ ದಾರಿಯಲ್ಲಿ ಅದೆಷ್ಟೋ ನೋವು ಬಂದರು ನೀವು ಬರೆದ ಪುಸ್ತಕದ ಅಕ್ಷರಗಳನ್ನು ನೋಡಿ ಮನಸಿನ ಭಾರ ಕಡಿಮೆ ಮಾಡಿಕೊಂಡೆ ಅವಕಾಶ ಬೇಗನೆ ಸಿಕ್ತು ನಿರೂಪಣೆ ಯಲ್ಲಿ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಹೆಚ್ಚಾಯಿತು..ಅಷ್ಟರಲ್ಲಿ ಒಳ್ಳೆಯ ಮನೆತನದ ಹುಡುಗನನ್ನು ಮದುವೆ ಆದೆ.ನನ್ನ ಜೀವನ ಅದ್ದೂರಿಯಾಗಿ ಸಾಗುತ್ತಿದೆ ಎಂದರೆ ಅದಕ್ಕೆ ನೀವೆ ಕಾರಣ ೨೧ನೇ ವಷ೯ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟೆ…ಜೀವನದಲ್ಲಿ ಸಂತೋಷ ಎಂದ್ರೆ ಏನು ಎಂದು ತಿಳಿಯಿತು.ಬದುಕು ಅಂದ್ರೆ ಇಷ್ಟೇ ನಾ ಇನ್ನು ೫೦ ವಷ೯ ಬೇಕು ಅನ್ನಿಸುತ್ತಿದೆ.ಜೀವನದಲ್ಲಿ, ಸಲಹೆಗಾರ,ಗುರು,ತಂದೆ-ತಾಯಿ ಮುಖ್ಯ.ತಾಯಿ ಇದ್ದರು ಒಂಟಿಯಾಗಿದ್ದೆ,ಸಲಹೆಗಾರ ನನ್ನ ಸ್ನೇಹಿತರು ಅವರಿಂದ ನಿಮ್ಮ ಪುಸ್ತಕ ಓದಿದೆ ಇದರ ಮೂಲಕ ಗುರುವಾಗಿ ಸಿಕ್ಕಿದ್ದಿರ ..ಜೀವನದಲ್ಲಿ ಒಮ್ಮೆಯಾದರು ನಿಮ್ಮನ್ನ ಭೇಟಿಯಾಗಲೇ ಬೇಕು.

Leave a comment