ಕವಿತೆಗಳನ್ನು ,ಕಥೆಗಳನ್ನು ಇನ್ನಿತರ ಯಾವುದೇ ಕನ್ನಡ ಲೇಖನವಿರಬಹುದು ಅದನ್ನು ಬರೆಯಬೇಕಾದರೆ, ‘ಪದ’ಗಳ ಪೂಜೆಯ ಜೊತೆಗೆ ‘ಪ್ರಾಸ’ದ ಪ್ರಸಾದವಿಟ್ಟು ‘ಅರ್ಥ’ವೆಂಬ ರುಚಿ ತರುವಷ್ಟರಲ್ಲಿ ಒಬ್ಬ ಕವಿ, ಒಬ್ಬ ಲೇಖಕನ ಶ್ರಮ ತುಂಬಾವಿರುತ್ತದೆ. ಆ ಕವಿತೆ ಓದುಗರಿಗೆ ಇಷ್ಟವಾಗದೆ ಹೋಗಬಹುದು ಆದರೆ ಒಬ್ಬ ಕವಿಗೆ ಆ ಕವಿತೆ/ಕಥೆ ತನ್ನ ಕ್ರೀಯಾಶೀಲತೆಗೆ ಹಿಡಿದ ಕನ್ನಡಿ ಆಗಿರುತ್ತದೆ
ಸರ್ವಜ್ಞ ಹೇಳಿದಂತೆ –
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ.!
ಎಲ್ಲ ಸಾಹಿತಿಗಳನ್ನು ಓದಿ , ಎಲ್ಲ ಸಾಹಿತ್ಯ ಪ್ರಕಾರಗಳನ್ನೂ ಓದಿಯೂ ತನ್ನ ಸ್ವಂತಿಕೆ ಇಟ್ಟುಕೊಂಡು ಸಾಹಿತ್ಯದ ಅಳಿಲು ಸೇವೆ ಮಾಡುತ್ತಿರುವ ಎಲ್ಲ ಕವಿಬಾಂಧವರ ಪರವಾಗಿ ಕೇಳಿಕೊಳ್ಳುತ್ತೇನೆ- ನೀವು ಯಾರದೇ ಕವಿತೆ/ಕಥೆ/ಲೇಖನ ಓದಿ ಇಷ್ಟವಾದರೆ ಲೈಕ್ ಮಾಡಿ,ಕಾಮೆಂಟ್ ಮಾಡಿ ಶೇರ್ ಮಾಡಿ ಆದರೆ ಬರೆದವರ ಹೆಸರನ್ನು ನಮೂದಿಸಲು ಮರೆಯಬೇಡಿ. ಏಕೆಂದರೆ
“ಓದುಗರಿಗೆ ಕವಿತೆ ಆ ಕ್ಷಣದ ಭಾವ ಆದರೆ ಕವಿಗೆ ಕವಿತೆಯೇ ಜೀವ !”